ಇಂದು ಶಿರಸಿ ನಗರ ವ್ಯಾಪ್ತಿಯ ರಾಜೀವನಗರ ವಾರ್ಡ್ ಗೆ ಭೇಟಿ ನೀಡಿ ಅಂಗನವಾಡಿ ನಿರ್ಮಾಣಕ್ಕೆ ಮತ್ತು ಗಣೇಶನಗರದ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಹಾಗೂ ಮಾರಿಕಾಂಬಾ ಶಾಲೆ, ಉರ್ದು ಶಾಲೆ, ಮಾರಿಕಾಂಬಾ ಕಾಲೇಜು, ಶಾಸಕರ ಮಾದರಿ ನಂ 2 ಶಾಲೆಗಳಿಗೆ ಶೌಚಾಲಯಗಳ ನಿರ್ಮಾಣಕ್ಕೆ ನಗರೋತ್ಥಾನ ಹಂತ -4 ರ ಅಡಿಯ ಅಂದಾಜು 80 ಲಕ್ಷ ರೂ . ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದೆನು.
ನಂತರ ವಾರ್ಡ್ ವ್ಯಾಪ್ತಿಯ ಜನಸಾಮಾನ್ಯರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭರವಸೆ ನೀಡಿದೆನು .
ವರದಿ :ಕುಮಾರ