*ಪ್ರತಿಷ್ಠಿತ ಮುಖ್ಯಮಂತ್ರಿ ಪದಕಕ್ಕೆ ಭಾಜನರಾದ ಹುಲೆಕಲ್ ಅರಣ್ಯಾದಿಕಾರಿ ಶಿವಾನಂದ ನಿಂಗಾಣಿ*
ಅರಣ್ಯ ಇಲಾಖೆಯಲ್ಲಿ ಸಲ್ಲಿಸುತ್ತಿರುವ ದಿಟ್ಟ ಹಾಗು ದೈರ್ಯತನದ ಸೇವೆಗೆ ಮತ್ತು ಅರಣ್ಯ ಅಭಿವೃದ್ದಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಪ್ರಮಾಣಿಕತನದ ಸೇವೆಗಾಗಿ ಶಿರಸಿ ವಿಭಾಗದ ಹುಲೆಕಲ್ ವಲಯ ಅರಣ್ಯಾದಿಕಾರಿ ಶಿವಾನಂದ ಎಸ್ ನಿಂಗಾನಿ ಯ ವರಿಗೆ ಪ್ರತಿಷ್ಠಿತ 2024 ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ. ಅರಣ್ಯ ಇಲಾಖೆಯ ವಿವಿಧ ಹಂತದ ಕೆಲಸಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ ಪ್ರಧಾನ ಮಾಡುವ ಯೋಜನೆಯ ಪ್ರಸಕ್ತ ವರ್ಷದಲ್ಲಿ ಜಾರಿಯಲ್ಲಿದ್ದು ಶಿರಸಿ ಪ್ರಾದೇಶಿಕ ಅರಣ್ಯ ವಿಭಾಗ ಹುಲೆಕಲ್ ವಲಯದ ವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಎಸ್ ನಿಂಗಾಣಿ 14-03-2016 ನೇ ಸಾಲಿನಲ್ಲಿ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿಯಾಗಿ ಆಯ್ಕೆಯಾಗಿ 2016 ರಿಂದ 2018ರವರೆಗೆ ಕರ್ನಾಟಕ ಅರಣ್ಯ ಅಕಾಡೆಮಿ ಗುಂಗರ ಗಟ್ಟಿಯಲ್ಲಿ ವಲಯ ಅರಣ್ಯಾಧಿಕಾರಿ ಹುದ್ದೆಯ ತರಬೇತಿಯನ್ನು ಪಡೆದುಕೊಂಡಿರುತ್ತಾರೆ. ತದನಂತರ ಹುಣಸೂರ್ ಆನೆ ಚೌಕೂರ್,ಸಿದ್ದಾಪುರ,ಶಿ ರಸಿ ವಲಯಗಳ ಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ಈಗ ಶಿರಸಿ ವಿಭಾಗದ ಹುಲೆಕಲ್ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿವಾನಂದ ನಿಂಗಾಣಿ ಯವರ ಕಾರ್ಯಾವಧಿಯಲ್ಲಿ 250 ಕ್ಕಿಂತ ಅಧಿಕ ಪ್ರಕರಣಗಳನ್ನು ತನಿಕಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ದ್ದಾ ರೆ. ಅವುಗಳಲ್ಲಿ ಪ್ರಮುಖವಾದದ್ದು ಒಂದು ಕೋಟಿ ಮೌಲ್ಯದ ಸಾಗುವಾನಿ,ಕಿಂದಳ,ಮತ್ತಿ, ದಾಮಣ ಜಾತಿಯ 52 ನಾಟಾಗಳು ಹಾಗೂ ಎರಡು ಲಾರಿ ಜಪ್ತಿ ಹಾಗೂ ನಾಲ್ಕು ಆರೋಪಿಗಳ ಬಂಧನ ಮಾಡಿದ್ದಾರೆ.ಶ್ರೀಗಂಧ ಕಳ್ಳನಿಗೆ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ ದಂಡ ಹಾಗೂ ಶಿರಸಿ ಸಿದ್ದಾಪುರ ವಲಯದಲ್ಲಿ ಕಾರ್ಯ ನಿರ್ವಹಣೆ ಮಾಡುವಾಗ 80 ಕೆಜಿಗೂ ಅಧಿಕ ಶ್ರೀಗಂಧ ಜಪ್ತಿ ಮಾಡಿದ್ದಾರೆ. 24 ಗಂಟೆಗಳಲ್ಲಿ ಭೇ ದಿಸಿದ ಚಿರತೆ ಸಾವಿನ ಪ್ರಕರಣ,ಅರಣ್ಯ ಅತಿಕ್ರಮಣ ತಡೆ, ಅಕ್ರಮವಾಗಿ ದಾಸ್ತನಿಟ್ಟ 5 ಲಕ್ಷ ಮೌಲ್ಯದ ಬೀಟೆ ಸೈಜ್ ಹಲಗೆಗಳ ಜಪ್ತಿ ಇತರೆ ವನ್ಯಜೀವಿ ಪ್ರಕರಣಗಳು ಇವರ ಕಾರ್ಯ ಸಾಧನೆಯಲ್ಲಿವೆ.ಇವರ ಈ ಸಾಧನೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಮಾಡಲಾಗಿದೆ.ಇವರ ತಂದೆ ಶಂಬಾಜಿ ಕೂಡಾ ಹಾಲಿ ಶಿರಸಿ ಎಸಿಎಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
*ಅಭಿನಂದನೆ*:- ತಮ್ಮ ಸಾಧನೆಯಿಂದ ಮುಖ್ಯಮಂತ್ರಿ ಪದಕಕ್ಕೆ ಬಾಜನರಾಗಿರುವ ಹುಲೆಕಲ್ ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿಯವರಿಗೆ ಶಾಸಕ ಭೀಮಣ್ಣ ನಾಯ್ಕ ಅಭಿನಂದನೆ ಸಲ್ಲಿಸಿದ್ದಾರೆ.