ಉತ್ತರ ಕನ್ನಡ ಜಿಲ್ಲೆ, ಭಾವಿಕೇರಿ ಗ್ರಾಮ ವ್ಯಾಪ್ತಿಯಲ್ಲಿ NTPC ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ವರದಿ ಸಲ್ಲಿಸಲು ನಿರ್ದೇಶಿಸಿದ್ದು ಇರುತ್ತದೆ.
. ಅದರಂತೆ, ಭಾವಿಕೇರಿ ಗ್ರಾಮವು ಪ್ರಸ್ತಾಪಿತ ಭಾರತೀಯ ನೌಕಾಪಡೆ ವಿಮಾನ ನಿಲ್ದಾಣ (Naval Airport) ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದು, ನೌಕಾಪಡೆ ಆವರಣಗಳು ಗ್ರಾಮ ಮಿತಿಯೊಳಗೆ ಬರುತ್ತವೆ. ಈ ಕಾರಣದಿಂದ ಈ ಪ್ರದೇಶವು ತಂತ್ರಮೂಲಕ ಹಾಗೂ ಭದ್ರತಾ ದೃಷ್ಟಿಯಿಂದ ಅತ್ಯಂತ ಸಂವೇದನಾಶೀಲವಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೈಗಾ ಅಣು ವಿದ್ಯುತ್ ಸ್ಥಾವರವು, ಭಾವಿಕೇರಿ ಗ್ರಾಮದಿಂದ ಸುಮಾರು 45-50 ಕಿ.ಮೀ. ವೈಮಾನಿಕ ದೂರದಲ್ಲಿ ಸ್ಥಿತಿಯಲ್ಲಿದ್ದು, ಈ ಪ್ರದೇಶವು ಭದ್ರತಾ ದೃಷ್ಟಿಯಿಂದ ಮಹತ್ವದ ವಲಯವಾಗಿರುತ್ತದೆ. ಹಾಗೂ ಭಾವಿಕೇರಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ & ನೌಕಾನೆಲೆ ಯೋಜನೆಗಳಲ್ಲಿ ಭೂಮಿ ಕಳೆದುಕೊಂಡಿರುವ ಭೂನಿರಾಶ್ರಿತರು ನೆಲೆಸಿದ್ದು ಇರುತ್ತದೆ.
ಮೇಲ್ಕಂಡ ಎಲ್ಲಾ ಅಂಶಗಳನ್ನು ಒಟ್ಟಾರೆಯಾಗಿ ಪರಿಶೀಲಿಸಿದಾಗ, ವಿಶೇಷವಾಗಿ ಭದ್ರತಾ ಹಾಗೂ ತಂತ್ರಮೂಲಕ ಪರಿಗಣನೆಗಳ ಹಿನ್ನೆಲೆಯಲ್ಲಿ, ಭಾವಿಕೇರಿ ಗ್ರಾಮ ವ್ಯಾಪ್ತಿಯ ಭೂಮಿಯು NTPC ಯೋಜನೆ ಸ್ಥಾಪನೆಗೆ ಸೂಕ್ತವಿರುವುದಿಲ್ಲವೆಂಬ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.