* ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*ಶಿರಸಿ PWD EE ಮಲ್ಲಿಕಾರ್ಜುನ ಎತ್ತoಗಡಿ: ನೂತನ EE ಆಗಿ ಎಸ್. ಎನ್. ಸಿದ್ದಾಪುರ*

*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*
*ಶಿರಸಿ* ಲೋಕೋಪಯೋಗಿ ಇಲಾಖೆ ಶಿರಸಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೊನೆಗೂ ಇಲ್ಲಿಂದ ಎತ್ತಂಗಡಿ ಆಗಿದ್ದಾರೆ.ಕಾರ್ಯನಿರ್ವಹಣೆಯಲ್ಲಿ ತೀವ್ರ ವಿವಾದಕ್ಕೊಳಗಾಗಿದ್ದ ಮಲ್ಲಿಕಾರ್ಜುನರನ್ನು ಇಲ್ಲಿಂದ ವರ್ಗ ಮಾಡಲಾಗಿದೆ. ಉಪರಾಷ್ಟ್ರಪತಿಗಳು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಡಳಿತ ಸದ್ರಿ ಅಧಿಕಾರಿಯನ್ನು ಸಂಪರ್ಕಿಸಿದಾಗ,ಇವರು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅತಿಥಿಗಳ ಕುರಿತು ನಿರ್ಲಕ್ಷ ತೋರಿದ ಬಗ್ಗೆ ಶೋಕಾಸ್ ನೋಟಿಸ್ ಕೂಡ ನೀಡಿತ್ತು ಎಂದು ಹೇಳಲಾಗಿದೆ. ಈಗ ಈ ಅಧಿಕಾರಿಗೆ ಇಲ್ಲಿಂದ ವರ್ಗ ಮಾಡಲಾಗಿದೆ. ಇಂದು ಮಧ್ಯಾಹ್ನ ಶಿರಸಿ ಲೋಕೋಪಯೋಗಿ ಇಲಾಖೆ ಶಿರಸಿ ವಿಭಾಗದ ನೂತನ ಕಾರ್ಯ ನಿರ್ವಾಹಕ ಇಂಜಿನಿಯರಾಗಿ ಎಸ್‌.ಎನ್. ಸಿದ್ದಾಪುರ ಎನ್ನುವವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಅವರು ಧಾರವಾಡದಿಂದ ಇಲ್ಲಿ ವರ್ಗವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
PGK

Post a Comment

Previous Post Next Post