*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್:* ಉಜ್ಜಯಿನಿ ಜಗದ್ಗುರುಗಳ ಸೂಚನೆಯಂತೆ ಕೊಟ್ಟೂರು-ಚಿತ್ರದುರ್ಗ ಹೊಸ ರೈಲು ಮಾರ್ಗದ ಸಮೀಕ್ಷೆಗೆ ಆದೇಶಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಕನ್ನಡ ಭಾಷಾ ನೌಕರರಿಗೆ ಅನುಕೂಲವಾಗುವಂತೆ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಹಲವು ರೈಲ್ವೆ ಯೋಜನೆಗಳಿಗೆ ಮರು ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು
ವಿಜಯನಗರ: '' ಉಜ್ಜಯಿನಿ ಜಗದ್ಗುರುಗಳ ಸೂಚನೆಯಂತೆ ಉಜ್ಜಯಿನಿ ಮಾರ್ಗವಾಗಿ ಕೊಟ್ಟೂರು - ಚಿತ್ರದುರ್ಗ ಹೊಸ ರೈಲು ಸಂಚಾರಕ್ಕಾಗಿ ಶೀಘ್ರವೇ ಸಮೀಕ್ಷೆ ಕಾರ್ಯಕ್ಕೆ ಆದೇಶ ನೀಡುತ್ತೇನೆ,'' ಎಂದು ಹೇಳಿದರು.ಕೊಟ್ಟೂರು ತಾಲೂಕಿನ ಉಜ್ಜಯಿನಿಯಲ್ಲಿ ನಡೆದ ಶಿಖರ ತೈಲಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ''ಈ ಭಾಗದ ಜನತೆಯ ಅನುಕೂಲಕ್ಕಾಗಿ ಮತ್ತು ಕೊಟ್ಟೂರು ಉಜ್ಜಯಿನಿ ಧಾರ್ಮಿಕ ಕ್ಷೇತ್ರಗಳಿಂದ ಚಿತ್ರದುರ್ಗಕ್ಕೆ ತೆರಳುವ ಪ್ರಯಾಣಿಕರಿಗೆ ಬಹು ಅನುಕೂಲವಾಗುವ ದೃಷ್ಟಿಯಿಂದ ಜಗದ್ಗುರುಗಳು ಹೇಳಿದ್ದು, ಇದನ್ನು ತಪ್ಪದೇ ಜಾರಿ ಮಾಡುತ್ತೇನೆ. ಕೊಟ್ಟೂರು ಮಾರ್ಗವಾಗಿಯೂ ಬೇಡಿಕೆಯಂತೆ ರೈಲು ಸಂಚಾರ ಕುರಿತು ಪರಿಶೀಲಿಸುತ್ತೇನೆ,'' ಎಂದರು.
ರಾಜ್ಯದ ಭಾಷೆಗಳಿಗೂ ಅವಕಾಶ
''12 ಲಕ್ಷಕ್ಕೂ ಹೆಚ್ಚು ಕನ್ನಡ ಭಾಷೆಯ ನೌಕರರು ರೈಲ್ವೆ ಇಲಾಖೆಯಲ್ಲಿದ್ದಾರೆ. ಅವರಿಗೆ ಅನುಕೂಲವಾಗುವ ದೃಷ್ಟಿಯಿಂದಲೇ