ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್* RCB ವಿಜಯೋತ್ಸವ ದುರಂತ:ಪೊಲೀಸರ ತಲೆ ದಂಡ ಮುಖ್ಯಮಂತ್ರಿಯಿಂದ ಆರ್‌ಸಿಬಿಗೆ ಕಾನೂನು ಚಾಟಿ.

*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*

*ಬೆಂಗಳೂರು*: ಆರ್ ಸಿ ಬಿ ವಿಜಯೋತ್ಸವ ವೇಳೆ ದುರಂತದಲ್ಲಿ  11 ಅಮಾಯಕರ ಸಾವಿನ ಹಿನ್ನಲೆಯಲ್ಲಿ 5 ಪೊಲೀಸ್ ಅಧಿಕಾರಿಗಳ ತಲೆ ದಂಡವಾಗಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್‌​ , ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್‌, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಹೆಚ್‌.ಟಿ.ಶೇಖರ್, ಎಸಿಪಿ ಬಾಲಕೃಷ್ಣ, ಕಬ್ಬನ್‌ಪಾರ್ಕ್‌ ಇನ್ಸ್‌ಪೆಕ್ಟರ್‌ ಗಿರೀಶ್‌.ಎ.ಕೆ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.ಸಂಪುಟ ಸಭೆಯಲ್ಲಿ ಚರ್ಚೆಯ ನಂತರ ಸರಕಾರದ ಈ ನಿರ್ಧಾರ ಹೊರಬಿದ್ದಿದೆ ಎಂದು ತಿಳಿದು ಬಂದಿದೆ.ಅಲ್ಲದೆ ಘಟನೆ ಹಿನ್ನಲೆಯಲ್ಲಿ RCB ಮ್ಯಾನೇಜ್ಮೆಂಟ್ ಸೇರಿದಂತೆ 3 ಸಂಸ್ಥೆಗಳ ಮೇಲೆ FIR ದಾಖಲಿಸುವಂತೆ ಸರಕಾರ ಸೂಚಿಸಿದೆ ಎಂದು ಹೇಳಲಾಗಿದೆ.
PGK

Post a Comment

Previous Post Next Post