*ಹಾನಗಲ್*:ಇಂದು ಬೆಳಗ್ಗೆ ಶಾಸಕರಾದ ಮಾನೆ ಶ್ರೀನಿವಾಸ ಅವರು ಹಾನಗಲ್ ನಗರದ ತಾಲೂಕಾಸ್ಪತ್ರೆ ಪಕ್ಕದ *ಇಂದಿರಾ ಕ್ಯಾಂಟೀನ್* ನಲ್ಲಿ ಉಪಹಾರ ಸೇವಿಸುವ ಮೂಲಕ ಬಡವರ ಹಸಿವು ನೀಗಿಸಲಿರುವ ಕ್ಯಾಂಟೀನ್ ಗೆ ಚಾಲನೆ ನೀಡಿದರು.
ಹಾನಗಲ್* ತಾಲೂಕಾ ಕೇಂದ್ರದಲ್ಲಿ *ಇಂದಿರಾ ಕ್ಯಾಂಟೀನ್* ಆರಂಭಿಸಬೇಕು ಎನ್ನುವ ಕನಸು ಇದೀಗ ನನಸಾಗಿದೆ. ತಾಲೂಕಾಸ್ಪತ್ರೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಿಗೆ ಆಗಮಿಸುವ ಜನಸಾಮಾನ್ಯರಿಗೆ ಇದರಿಂದ ಅನುಕೂಲವಾಗಲಿದ್ದು, ಸದುಪಯೋಗಕ್ಕೆ ಮಾನೆ ಶ್ರೀನಿವಾಸ ಅವರು ಮನವಿ ಮಾಡಿದರು.ಇನ್ನಿತರ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.