*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್* ಬೆಂಗಳೂರು: ಕರ್ನಾಟಕ ಸರ್ಕಾರವು ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಮುಂದಾಗಿದೆ. ಲೋಕೋಪಯೋಗಿ ಇಲಾಖೆಯಿಂದ ರಾಜ್ಯದ ಪ್ರಮುಖ 11 ಹೆದ್ದಾರಿಗಳನ್ನು ಉನ್ನತೀಕರಣ ಮಾಡುತ್ತಿದ್ದು, 12 ಜಿಲ್ಲೆಗಳ ವಾಹನ ಸವಾರರಿಗೆ ಭಾರೀ ಅನುಕೂಲವಾಗಲಿದೆ.
ಸರ್ಕಾರಕ್ಕೆ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಹಲವು ಬಾರಿ ಮನವಿ ಮಾಡಲಾಗಿತ್ತು, ಸುಗಮವಾದ ರಸ್ತೆಗಳು ಇಲ್ಲದೇ ಸವಾರರಿಗೆ ಕಿರಿ ಕಿರಿ ಉಂಟಾಗಿತ್ತು, ಹೆದ್ದಾರಿಗಳಲ್ಲಿನ ಗುಂಡಿಗಳಿಂದ ಸವಾರರು ಹೈರಾಣಾಗಿದ್ದರು. ಹೀಗಾಗಿ ಸರ್ಕಾರದ ಮುಂದೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಸ್ತಾಪ ಮಾಡಲಾಗಿತ್ತು, ಬಜೆಟ್ನಲ್ಲೂ ಕೂಡ ಸಿದ್ದರಾಮಯ್ಯ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಅನುದಾನ ಮೀಸಲಿಟ್ಟಿದ್ದರು. ಈಗ ಕಾರ್ಯಗತಕ್ಕೆ ಬಂದಿದೆ.
ಯಾವೆಲ್ಲಾ ಹೆದ್ದಾರಿ?
ಮಳವಳ್ಳಿ - ಬಾವಲಿ ಹೆದ್ದಾರಿ - 141 ಕಿ.ಮೀ
ಹುಲ್ಲಹಳ್ಳಿ - ಸಂತೇಮಾರನಹಳ್ಳಿ - 55 ಕಿ.ಮೀ
ಹನೂರು - ಪಾಲರ್ - 70 ಕಿ.ಮೀ
ಮಡಿಕೇರಿ-ಡೊನೆಗಲ್ - 94 ಕಿ.ಮೀ
ಶ್ರೀರಂಗಪಟ್ಟಣ- ಚನ್ನರಾಯಪಟ್ಟಣ- 63 ಕಿ.ಮೀ
ಮಾಗದಿ - ಹುಣಸನಹಳ್ಳಿ - 95 ಕಿ.ಮೀ
ಚಡಚಣ - ಗಾಣಗಾಪುರ - 115 ಕಿ.ಮೀ
ದಿಂಡಾವಾರ್ - ನಾಲತವಾಡ - 95 ಕಿ.ಮೀ
ಸಂಕೇಶ್ವರ - ಲೋಕಾಪುರ - 100 ಕಿ.ಮೀ
ಗಿಣಿಗೇರಾ - ಮುಂಡರಗಿ - 41 ಕಿ.ಮೀ
ಮೈದ್ನೇರಿ ಕ್ರಾಸ್ - ಕತ್ರಾಲ ಕ್ರಾಸ್ - 45 ಕಿ.ಮೀ
12 ಜಿಲ್ಲೆಗೆ ಅನುಕೂಲ
ಮೈಸೂರು
ಮಂಡ್ಯ
ಚಾಮರಾಜನಗರ
ಚಿಕ್ಕಬಳ್ಳಾಪುರ
ಕೊಡಗು
ರಾಮನಗರ
ವಿಜಯಪುರ
ಕಲುಬುರಗಿ
ಬೆಳಗಾವಿ
ಬಾಗಲಕೋಟೆ
ಗದಗ
ಕೊಪ್ಪಳ
ಏನೆಲ್ಲಾ ಅಭಿವೃದ್ದಿ?
ರಾಜ್ಯ ಹೆದ್ದಾರಿಗಳ ಅಗಲೀಕರಣ
ಅಗತ್ಯವಿರುವ ಕಡೆಗಳಲ್ಲೊ ಪಥಗಳ ಹೆಚ್ಚಳ
ಡಾಂಬರೀಕರಣ
ಜಂಕ್ಷನ್ ನಿರ್ಮಾಣ
ರಸ್ತೆ ದೀಪ ಸೇರಿದಂತೆ ಇತರೆ ಸೌಕರ್ಯ
ಮೊದಲ ಪ್ಯಾಕೇಜ್ನಲ್ಲಿ ಮಂಡ್ಯ, ಚಾಮರಾಜನಗರ, ಮೈಸೂರಲ್ಲಿ 266 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಮಳವಳ್ಳಿಯಿಂದ ಕೇರಳ ಗಡಿಯ ಬಾವಲಿವರೆಗಿನ ರಾಜ್ಯ ಹೆದ್ದಾರಿ - 33 ರಲ್ಲಿ 141 ಕಿ.ಮೀ ಮತ್ತು ರಾಜ್ಯ ಹೆದ್ದಾರಿ - 79 ರಲ್ಲಿ ಹನೂರು ಮತ್ತು ಪಾಲಾರ್ (ರಾಮಾಪುರ) ನಡುವೆ 70 ಕಿ. ಮೀ ಈ ಪ್ಯಾಕೇಜ್ನಲ್ಲಿದೆ
2 ನೇ ಪ್ಯಾಕೇಜ್ನಲ್ಲಿ ಮಡಿಕೇರಿ ಮತ್ತು ಡೋನೆಗಲ್ ನಡುವೆ 95 ಕಿ.ಮೀಟರ್, ಶ್ರೀರಂಗಪಟ್ಟಣ ಮತ್ತು ಚನ್ನರಾಯಪಟ್ಟಣ ನಡುವೆ 63 ಕಿ.ಮೀಟರ್ ಮತ್ತು ಮಾಗಡಿ ಮತ್ತು ಹಣಸನಹಳ್ಳಿ 95 ಕಿ.ಮೀಟರ್ ರಸ್ತೆಯನ್ನು ಕಾರ್ಯಗತಗೊಳಿಸಲಿದೆ.
ಎಷ್ಟು ವೆಚ್ಚದಲ್ಲಿ ಅಭಿವೃದ್ಧಿ?
ಈ 11 ಹೆದ್ದಾರಿಗಳ ಅಭಿವೃದ್ಧಿಗೆ 5736 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಮತ್ತು ವಿಶ್ವಬ್ಯಾಂಕ್ ಬಾಹ್ಯ ಸಂಸ್ಥೆಗಳಿಂದ ಹಣಕಾಸಿನ ನೆರವು ಸಿಕ್ಕಿದೆ. ರಾಜ್ಯದ ರಸ್ತೆಗಳು ಮತ್ತು ಹೆದ್ದಾರಿ ಅಭಿವೃದ್ಧಿ ಪಡಿಸಲು ಕೆ-ಶಿಪ್ ಯೋಜನೆ ಲೋಕೋಪಯೋಗಿ ಇಲಾಖೆಯಲ್ಲಿ ಪ್ರಮುಖ ಪಾತ್ರವಹಿಸಿದೆ.